ಇಳೆಯು
ದಾಹದಿ ಬೆಂದಿಹುದು
ಮಣ್ಣಿನ
ಕಂಪಿದು ಮಾಸಿಹುದು
ಬರಗಾಲ
ನಕ್ಕು ಕರತಾಡನ ಗೈಯುತಿರೆ
ಅಂತರ್ಜಲ
ಬತ್ತಿ ಸಾವು ಕಂಡಿಹುದು||
ಗದ್ಗತಿತ
ಕಂಠದಲಿ ಧರೆಯು ಕೂಗುತಿರೆ
ತೃಷೆಯಿಂದ
ಬಳಲಿಹೆನು ನೀರು ಕೊಡು ಎನುತಿರೆ
ಮೋಡಗಳ
ತಾತ್ಸಾರ ಕಂಡು ಬೆರಗಾಗುತಿರೆ
ತೋರಿಸಬಾರದೇ
ಮಳೆ ಬರುವ ಚಹರೆ ||
ದಿನದಿನವು
ಏರಿಹುದು ಸೂರ್ಯನ ಭುಗಿಲು
ಕನಿಕರವ
ತೋರದೇ ಆ ಬಾನ ಮುಗಿಲು
ಬಾಡಿಹುದು
ಅರಳುವ ಹೂವಿನ ಎಸಳು
ಇನ್ನೆಷ್ಟು
ಕಾಲವು ಈ ಭೂಮಿ ನಗಲು ||
-ಪೂರ್ಣಿಮಾ
ಶೆಟ್ಟಿ,,
ಡಯಟ್ ಕಾಸರಗೋಡು,, ಮಾಯಿಪ್ಪಾಡಿ.
ಡಯಟ್ ಕಾಸರಗೋಡು,, ಮಾಯಿಪ್ಪಾಡಿ.
No comments:
Post a Comment